ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:06.10.2016ರಂದು ಸಂಜೆ 05.00 ಗಂಟೆಯಿಂದ ದಿನಾಂಕ 07.10.2016 ರಂದು ಬೆಳಿಗ್ಗೆ 10.00 ಗಂಟೆಯವರೆಗೆ ದಾಖಲಾದ ಅಪರಾಧ ಪ್ರಕರಣಗಳ ವಿವರಗಳು:-
-ಕೊಲೆ : ಇಲ್ಲ
-ಕೊಲೆಗೆ ಪ್ರಯತ್ನ : ಇಲ್ಲ
-ಡಕಾಯತಿ : ಇಲ್ಲ
-ಸುಲಿಗೆ : ಇಲ್ಲ
-ಮನೆ ಕಳ್ಳತನ : ಇಲ್ಲ
-ಸಾಧಾರಣ ಕಳ್ಳತನ : ಇಲ್ಲ
-ವಾಹನ ಕಳ್ಳತನ : ಇಲ್ಲ
-ರಸ್ತೆ ಅಪಘಾತಗಳು : ಇಲ್ಲ
-ಮೋಸ/ವಂಚನೆ ಪ್ರಕರಣಗಳು :ಇಲ್ಲ
– ದೊಂಬಿ : ಇಲ್ಲ
– ಜೂಜಾಟ ಕಾಯ್ದೆ : ಇಲ್ಲ
-ಅಪಹರಣ : ಇಲ್ಲ
-ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು : ಇಲ್ಲ
-ಹಲ್ಲೆ :01
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 06.10.2016 ರಂದು ದೂರುದಾರರಾದ ಶ್ರೀಮತಿ. ನಾರಾಯಣಮ್ಮ ಕೋಂ. ಮುನಿಸ್ವಾಮಿ ರೆಡ್ಡಿ. ಬಲುವನಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ. ದಿನಾಂಕ. 06.10.2016 ರಂದು ಮಧ್ಯಾಹ್ನ 2.30 ಗಂಟೆಗೆ ದೂರುದಾರರು ಬಲುವನಹಳ್ಳಿ ಗ್ರಾಮದ ಅವರ ಜಮೀನಿನಲ್ಲಿರುವಾಗ ಆರೋಪಿಗಳಾದ ಯೋಗಾನಂದರೆಡ್ಡಿ ಮತ್ತು ಲಕ್ಷ್ಮಮ್ಮ ರವರು ಜಮೀನಿನೊಳೆಗೆ ಅಕ್ರಮ ಪ್ರವೇಶ ಮಾಡಿ ಕಲ್ಲು ಕೂಚುಗಳಿಗೆ ಮುಳ್ಳು ತಂತಿಯನ್ನು ಹಾಕಲು ಬಂದಾಗ ಅದನ್ನು ಕಂಡು ದೂರುದಾರರು ಕೇಳಿದಕ್ಕೆ ಆರೋಪಿಗಳು ಕೆಟ್ಟ ಮಾತುಗಳಿಂದ ಬೈದು ಕೈಗಳಿಂದ ಹೊಡೆದು ರಕ್ತ ಗಾಯಪಡಿಸಿ, ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.
-ಇತರೆ : 01
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಕ್ರಮ ಮರಳು ಸಾಗಾಣೆಕೆ ಮಾಡುತ್ತಿದ್ದವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 06.10.2016 ರಂದು ದೂರುದಾರರಾದ ಶ್ರೀ. ರವಿಕುಮಾರ್, ಪಿಎಸ್ಐ, ಬಂಗಾರಪೇಟೆ ರವರಿಗೆ ಬಂದ ಮಾಹಿತಿಯ ಮೇರೆಗೆ ಪಾಕರಹಳ್ಳಿ ಗ್ರಾಮದ ಮರಿಯಮ್ಮ ಕೋಂ ದೊಡ್ಡಪ್ಪಯ್ಯ ರವರ ಜಮೀನಿನಲ್ಲಿ ಯಾವುದೇ ಪರವಾನಿಗೆ ಇಲ್ಲದೆ, ಅಕ್ರಮವಾಗಿ ಮರಳು ಪಿಲ್ಟರ್ ನ್ನು ಮಾಡುತ್ತಿರುವುದಾಗಿ ತಿಳಿದು ಬಂದಿದ್ದು, ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಲಾಗಿ ಅಲ್ಲಿದ್ದ ಅರೋಪಿಗಳಾದ ವೆಂಕಟೇಶ್, ರಾಜಣ್ಣ, ನಟರಾಜ್ ರವರು ಮರಳು ಪಿಲ್ಟರ್ ಮಾಡುತ್ತಿದ್ದವರ ವಿರುದ್ದ ಕಾನೂನು ಕ್ರಮ ಜರುಗಿಸಿರುತ್ತಾರೆ.
-ಅಕ್ರಮ ಮದ್ಯ ಮಾರಾಟ : ಇಲ್ಲ
-ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : ಇಲ್ಲ
-ಅಸ್ವಾಭಾವಿಕ ಮರಣ : ಇಲ್ಲ
-ಭದ್ರತಾ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ
-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ